PM-USP ಶಿಕ್ಷಣ ಸಚಿವಾಲಯವು ಕಾಲೇಜು ಮತ್ತು ವಿಶ್ವವಿದ್ಯಾಲಯದ “ಪ್ರಧಾನಮಂತ್ರಿ ಉಚ್ಚ ಶಿಕ್ಷಾ ಪ್ರೋತ್ಸಾಹ ಯೋಜನೆ” ಎಂಬ ಕೇಂದ್ರ ಪ್ರಾಯೋಜಿತ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದೆ. ಇದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಸುಲಭವಾಗಿ ಲಭ್ಯವಾಗುವಂತೆ ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಮಹತ್ವದ ಅವಕಾಶವನ್ನು ನೀಡಿದೆ.
ಪ್ರತಿ ವರ್ಷ 82,000 ಹೊಸ ವಿದ್ಯಾರ್ಥಿವೇತನಗಳನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು (ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ) ಅಧ್ಯಯನ ಮಾಡಲು ಯೋಜಿಸಲಾಗಿದೆ. ಇದರಲ್ಲಿ 12ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತಿದೆ.
ಯೋಜನೆಯ ಉದ್ದೇಶಗಳು ಮತ್ತು ಅರ್ಹತಾ ಉದ್ದೇಶಗಳು : ಈ ವಿದ್ಯಾರ್ಥಿವೇತನ ಯೋಜನೆಯ ಮುಖ್ಯ ಉದ್ದೇಶವು, ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯುವುದಾಗಿದೆ. ಆರ್ಥಿಕ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುವ ಸಂಖ್ಯೆಯನ್ನು ಕಡಿಮೆ ಮಾಡಿ, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪಡೆದರು ಪೂರ್ಣಗೊಳಿಸಿ ಸಮಾಜಕ್ಕೆ ಕೊಡುಗೆ ನೀಡುವಂತೆ ಪ್ರೇರೇಪಿಸುವುದು. ಇದು ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿದೆ.
ಅರ್ಹತೆಯ ಮಾನದಂಡಗಳು
- ವಿದ್ಯಾರ್ಥಿಗಳು 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತಮ್ಮ ಸಂಬಂಧಿತ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತರರಾದವರಲ್ಲಿ ಶೇ. 20% (80% ಕ್ಕಿಂತ ಹೆಚ್ಚು) ಅಂಕಗಳನ್ನು ಗಳಿಸಿಕೊಂಡಿರಬೇಕು.
- ಸಾಮಾನ್ಯ ಪದವಿ ಕೋರ್ಸ್ಗಳಲ್ಲಿ ಪ್ರವೇಶ ಪಡೆದಿರಬೇಕು. ಪತ್ರವ್ಯವಹಾರ, ದೂರಶಿಕ್ಷಣ ಅಥವಾ ಡಿಪ್ಲೊಮಾ ಕೋರ್ಸ್ ಗಳು ಈ ಯೋಜನೆಗೆ ಅರ್ಹವಾಗಿರುವುದಿಲ್ಲ.
- ಈ ವಿದ್ಯಾರ್ಥಿವೇತನವು ವಾರ್ಷಿಕ ₹4.5 ಲಕ್ಷದವರೆಗೆ ಆದಾಯ ಹೊಂದಿರುವ ಕುಟುಂಬಗಳು ಲಭ್ಯವಿವೆ. ಹೊಸ ಅರ್ಜಿದಾರರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು.
ವಿದ್ಯಾರ್ಥಿವೇತನದ ಪ್ರಯೋಜನಗಳು :
- ಈ ಯೋಜನೆಯು ಟ್ಯೂಷನ್ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಇತರ ಶೈಕ್ಷಣಿಕ ವೆಚ್ಚಗಳಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.
- 2022-23ರ ದರಗಳ ಪ್ರಕಾರ:ಪದವಿ ವಿದ್ಯಾರ್ಥಿಗಳಿಗೆ : ಮೊದಲ ಮೂರು ವರ್ಷಗಳಿಗೆ ವಾರ್ಷಿಕ ₹12,000.
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ : ವಾರ್ಷಿಕ ₹20,000.
- ಐದು ವರ್ಷಗಳ ವೃತ್ತಿಪರ/ಸಂಯೋಜಿತ ಕೋರ್ಸ್ಗಳ ವಿದ್ಯಾರ್ಥಿಗಳಿಗೆ : ನಾಲ್ಕನೇ ಮತ್ತು ಐದನೇ ವರ್ಷಗಳಲ್ಲಿ ವಾರ್ಷಿಕ ₹20,000.
- ಬಿ.ಟೆಕ್/ಬಿ.ಐ. ಸಾಮಾನ್ಯ ತಾಂತ್ರಿಕ ಕೋರ್ಸ್ಗಳ ವಿದ್ಯಾರ್ಥಿಗಳಿಗೆ : ಮೊದಲ ಮೂರು ವರ್ಷಗಳಿಗೆ ವಾರ್ಷಿಕ ₹12,000 ಮತ್ತು ನಾಲ್ಕನೇ ವರ್ಷಕ್ಕೆ ವಾರ್ಷಿಕ ₹20,000 ನೀಡಲಾಗುವುದು.
- ಭವಿಷ್ಯದಲ್ಲಿ ಯೋಜನೆ ಬದಲಾವಣೆಗಳಿಗೆ ಅನುಗುಣವಾಗಿ ಅರ್ಹತೆಯ ಮೊತ್ತ ಸಹಾ ಬದಲಾಗಬಹುದು ಎನ್ನಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ :
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (scholarships.gov.in) ಮೂಲಕ ಇದಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಡಿಜಿಲಾಕರ್ ಬಳಸಿ ನಿಮ್ಮ ವಿವರಗಳನ್ನು ಸ್ವಯಂ ಭರ್ತಿ ಮಾಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಕೆ, ಪರಿಶೀಲನೆ, ಆಯ್ಕೆ ಮತ್ತು ಹಣಕಾಸು ವಿತರಣೆಯ ಎಲ್ಲಾ ಹಂತಗಳನ್ನು ನಿರ್ವಹಣೆ ಮಾಡಲಾಗುವುದು. ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಯ ನಂತರ, ಪ್ರಧಾನಮಂತ್ರಿ ಉಚ್ಚ ಶಿಕ್ಷಾ ಪ್ರೋತ್ಸಾಹ ವಿದ್ಯಾರ್ಥಿವೇತನದ ಆಯ್ಕೆ ಪಟ್ಟಿಯನ್ನು ಪೋರ್ಟಲ್ನಲ್ಲಿ ಪ್ರಕಟಿಸಲಾಗುವುದು.
ವಿದ್ಯಾರ್ಥಿವೇತನದ ಪರಿಶೀಲನಾ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತಿದೆ

ಮೊದಲಿಗೆ ನಿಮ್ಮ ಶೈಕ್ಷಣಿಕ ಸಂಸ್ಥೆ ಅರ್ಜಿಯನ್ನು ಪರಿಶೀಲಿಸುತ್ತದೆ.
ನಂತರ, ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಥವಾ ನೋಡಲ್ ಏಜೆನ್ಸಿ ಹೊಸ ಅರ್ಜಿ ಅಥವಾ ನವೀಕರಣಕ್ಕೆ ಅಂತಿಮ ಪರಿಶೀಲನೆಯನ್ನು ನಡೆಸುತ್ತದೆ.
ಈ ವಿದ್ಯಾರ್ಥಿವೇತನವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ, ಅವರು ತನ್ನ ಜೀವನದಲ್ಲಿ ಯಶಸ್ಸು ಸಾಧಿಸಲು ನೆರವನ್ನು ನೀಡುತ್ತದೆ. ಇದು ಕೇವಲ ಆರ್ಥಿಕ ನೆರವು ಮಾತ್ರವೇ ಅಲ್ಲದೇ ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನು ಮಾಡಲು ಇದು ಪ್ರೇರಣೆಯಾಗಿದೆ.
ಹೆಚ್ಚಿನ ಮಾಹಿತಿ ಮತ್ತು ನೆರವಿಗಾಗಿ, ದಯವಿಟ್ಟು ಇಲ್ಲಿ ನೀಡಲಾದ PDF ಲಿಂಕ್ ಅನ್ನು ಅನುಸರಿಸಿ.
https://scholarships.gov.in/public/schemeGuidelines/Guidelines_DOHE_CSSS.pdf